ಸಂಬಂಧಗಳು

ಬಡತನ ಬಂದಾಗ
ಸಂಬಂಧ ಸುಟ್ಟಿತು
ನಮ್ಮ ಕರುಳೇ ನಮಗೆ
ಕೈಕೊಟ್ಟು ನಕ್ಕಿತು.

ಬಿರುಕು ಬಿಟ್ಟ ಗೋಡೆ
ಮುರುಕು ಮಾಳಿಗೆ ಮನೆ
ಮಳೆಯು ಸುಂಟರಗಾಳಿ
ಮನಸಾಗಿ ಮೂಡಿತು.

ಸುಟ್ಟ ಬೂದಿಯ ಮ್ಯಾಲೆ
ಸತ್ತ ಸಂಬಂಧಗಳು
ಕೊಂಡಿ ಕಳಚಿ ಬಿದ್ದ
ಕೈ ಕಾಲು ಮೂಳೆಗಳು.

ಅಕ್ಕ ತಂಗೇರೆಲ್ಲ
ಬಿರಿದ ಬೇಳೆಕಾಳು
ಅಣ್ಣ ತಮ್ಮದಿರೆಲ್ಲ
ಉರಿವ ಹುರುಳಿಕಾಳು.

ಹೆಂಡತಿ ಮಕ್ಕಳಿಗೆ
ಏನ ಹೇಳಲಿ ನಾನು?
ತಟ್ಟೆ ತಂಗಳು ತುಂಬಿ
ತೊನ್ನು ಹತ್ತಿದ ಬಾನು.
*****

One thought on “0

  1. ತುಂಬಾ ಸ್ವಾರಸ್ಯಕರ ವಾಗಿದೆ ಕವಿತೆ
    ಧನ್ಯವಾದಗಳು ಸರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post William Blake ಕಾವ್ಯಸಿದ್ಧಿಯ ಕಲಾಕಾರ
Next post ಟೂ ಬಿಡಲು ಕಾರಣ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys